ಬಾಗಲಕೋಟೆ: ಅಧಿಕಾರ ಮತ್ತು ಜಾತಿಯ ಮದ ನೆತ್ತಿಗೇರಿದಾಗ ಮನುಷ್ಯನ ವಿವೇಚನಾ ಶಕ್ತಿ ಕುಂದುತ್ತದೆ ಎಂಬುದಕ್ಕೆ ಬಿಜೆಪಿ ನಾಯಕ ಸಿ.ಸಿ. ಪಾಟೀಲರು (CC Patil) ಇತ್ತೀಚೆಗೆ ಬಳಸಿದ ಪದಗಳೇ ಸಾಕ್ಷಿ. ಸಾರ್ವಜನಿಕ ವೇದಿಕೆಗಳಲ್ಲಿ ಒಂದು ಸಮುದಾಯದ ಅಸ್ಮಿತೆಯನ್ನು ಹೀಯಾಳಿಸುವುದು ಮತ್ತು ತಮ್ಮದೇ ಆಪ್ತ ಬಳಗದ ನೈತಿಕ ಪತನವನ್ನು ಮರೆಮಾಚುವುದು ಸದ್ಯದ ಜಿಲ್ಲೆಯ ರಾಜಕಾರಣದ ಕರಾಳ ಮುಖವನ್ನು ಅನಾವರಣಗೊಳಿಸಿದೆ.
ಕುರುಬರ ಮೇಲಿನ ಅಸೂಯೆ ಮತ್ತು ‘ಟೂರ್’ ಎಂಬ ವ್ಯಂಗ್ಯ
ಹಾಲುಮತದ ಕುರುಬ ಸಮುದಾಯವೆಂದರೆ ಶ್ರಮಜೀವಿಗಳ ಲೋಕ. ಆದರೆ, ಈ ಸಮುದಾಯವನ್ನು ‘ಟೂರ್’ (ಅಲೆಮಾರಿಗಳು/ಕುರಿ ಕಾಯುವವರು) ಎಂದು ಜಾತಿನಿಂದನೆ ಮಾಡುವ ಮೂಲಕ ಸಿ.ಸಿ. ಪಾಟೀಲರು (CC Patil) ತಮ್ಮೊಳಗಿನ ವಿಷಪೂರಿತ ಮನಸ್ಥಿತಿಯನ್ನು ಹೊರಹಾಕಿದ್ದಾರೆ. ಮುಸ್ಲಿಮರನ್ನು ‘ಗಡ್ಡದವರು’ ಎಂದು ಅಣಕಿಸುವ ಇವರಿಗೆ, ಸಮಾಜದ ವಿವಿಧ ವರ್ಗಗಳ ಬಗ್ಗೆ ಕನಿಷ್ಠ ಗೌರವವೂ ಇಲ್ಲದಿರುವುದು ದುರಂತ.
ಈ ಅಸೂಯೆಯ ಹಿಂದೆ ಒಂದು ಬಲವಾದ ಕಾರಣವಿದೆ. ಹಿಂದುಳಿದ ವರ್ಗದಿಂದ ಬಂದ ವ್ಯಕ್ತಿಯೊಬ್ಬರು (ಸಿದ್ದರಾಮಯ್ಯ) ರಾಜ್ಯದ ರಾಜಕಾರಣದಲ್ಲಿ ಅತಿ ಎತ್ತರಕ್ಕೆ ಬೆಳೆದದ್ದು ಇವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಎರಡು ಬಾರಿ ಮುಖ್ಯಮಂತ್ರಿಯಾಗಿ, ರಾಜ್ಯದಲ್ಲಿ ಅತಿ ಹೆಚ್ಚು ಕಾಲ ಆಡಳಿತ ನಡೆಸಿದ ಹೆಗ್ಗಳಿಕೆ ಪಾತ್ರರಾಗಿ ಮತ್ತು ಬರೋಬ್ಬರಿ 17 ಬಾರಿ ಬಜೆಟ್ ಮಂಡಿಸಿ ದಾಖಲೆ ಬರೆದ ಸಿದ್ದರಾಮಯ್ಯನವರ ಸಾಧನೆ, ಇಂತಹ ಜಾತಿವಾದಿ ಪಿಶಾಚಿ ಮನಸ್ಥಿತಿಯವರಿಗೆ ನುಂಗಲಾರದ ತುತ್ತಾಗಿದೆ. ಆ ಸಾಧನೆಯನ್ನು ಎದುರಿಸಲಾಗದೆ, ಅವರ ಸಮುದಾಯವನ್ನೇ ಗುರಿಯಾಗಿಸಿ ‘ಟೂರ್’ ಎಂದು ನಿಂದಿಸುವುದು ಪಾಟೀಲರ ಕುತಂತ್ರಿ ಬುದ್ಧಿಯ ಪರಮಾವಧಿ.
ಇದನ್ನೂ ಓದಿ: ಬಿಜೆಪಿಗೆ ಮುಸ್ಲಿಮರು ಬೇಡ, ಈಗ ಕುರುಬರ ಮತಗಳೂ ಬೇಡ್ವಾ? ನಾಯಕರ ಉದ್ಧಟತನಕ್ಕೆ ಮತದಾರರೇ ಕಲಿಸ್ತಾರಾ ಪಾಠ?
ನೈತಿಕತೆಯ ಪ್ರಶ್ನೆ ಮತ್ತು ‘ಧರ್ಮರಕ್ಷಕರ’ ಮೌನ!
ಯಾವ ವ್ಯಕ್ತಿಯನ್ನು ಧರ್ಮಗುರುಗಳೆಂದು ನಂಬಿ ಇವರು ಇತರ ಸಮುದಾಯಗಳನ್ನು ಹೀಯಾಳಿಸುತ್ತಿದ್ದರೋ, ಈಗ ಅದೇ ಜಯಮೃತ್ಯುಂಜಯ ಸ್ವಾಮಿ ವಿರುದ್ಧ ಲೈಂಗಿಕ ಕಿರುಕುಳದಂತಹ ಅತಿ ಗಂಭೀರ ಆರೋಪಗಳು ಕೇಳಿಬಂದಿವೆ. ಇಲ್ಲಿ ಪಂಚಮಸಾಲಿ ಲಿಂಗಾಯತ ಸಮುದಾಯದ ಪ್ರಶ್ನೆಯೇ ಇಲ್ಲ. ಏಕೆಂದರೆ, ಅಧರ್ಮ ಎಲ್ಲಿ ನಡೆದರೂ ಅದನ್ನು ವಿರೋಧಿಸುವ ಗುಣ ಆ ಸಮುದಾಯಕ್ಕಿದೆ. ಅದಕ್ಕೇ ಪಂಚಮಸಾಲಿ ಲಿಂಗಾಯತ ಸಮುದಾಯದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ್ ಕಾಶಪ್ಪನವರ್ ಅವರು ಕೂಡಲೇ ಅಂತಹ ವ್ಯಕ್ತಿಯನ್ನು ಪೀಠದಿಂದ ಹೊರದಬ್ಬಿ ಸಮಾಜದ ಗೌರವ ಮತ್ತು ಧಾರ್ಮಿಕ ಪಾವಿತ್ರ್ಯತೆಯನ್ನು ಉಳಿಸಿಕೊಂಡಿದ್ದೇವೆ ಎಂದು ಅವರೇ ಹೇಳಿದ್ದಾರೆ.
ಆದರೆ, ಅಸಲಿ ಪ್ರಶ್ನೆ ಇರುವುದು ಸಿ.ಸಿ. ಪಾಟೀಲ್, ಯತ್ನಾಳ್ ಮತ್ತು ನಿರಾಣಿಯವರಿಗೆ. ಪರ ಸಮಾಜದ ಬಗ್ಗೆ ಲಘುವಾಗಿ ಮಾತನಾಡುವ ನೀವು, ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಇಂತಹ ವ್ಯಕ್ತಿಯ ಬೆನ್ನೆಲುಬಾಗಿ ನಿಂತಿದ್ದೇಕೆ? ಸಮಾಜಕ್ಕೆ ಸಂಸ್ಕಾರದ ಪಾಠ ಮಾಡುವ ನಿಮಗೆ, ಇಂತಹ ಕೃತ್ಯವೆಸಗಿದವರ ಪರ ನಿಲ್ಲಲು ಸಂಕೋಚವೆನಿಸಲಿಲ್ಲವೇ? ಕುರುಬರ ಬಗ್ಗೆ ಕೀಳಾಗಿ ಮಾತನಾಡುವ ನೀವು, ಇಂತಹ ಕಳಂಕಿತರ ಸಾಂಗತ್ಯದಲ್ಲಿರುವಾಗ ನಿಮ್ಮನ್ನು ಏನೆಂದು ಕರೆಯಬೇಕು?
ಹಾಲುಮತದ ಸ್ವಚ್ಛತೆ ವರ್ಸಸ್ ಕುತಂತ್ರಿ ಬುದ್ಧಿ
ಕುರುಬ ಸಮುದಾಯವು ದ್ವೇಷ ಅರಿಯದ, ಸ್ವಚ್ಛ ಮನಸ್ಸಿನ ಜನಾಂಗ. ಹಾಲಿನಂತಹ ಬಿಳಿ ಮನಸ್ಸಿನ ಈ ಜನರಿಗೆ ಕುತಂತ್ರ ಮಾಡುವುದು ಗೊತ್ತಿಲ್ಲ. ಆದರೆ, ಸಿ.ಸಿ. ಪಾಟೀಲರಂತಹ ನಾಯಕರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಮಾಜದಲ್ಲಿ ಜಾತಿ ವೈಷಮ್ಯದ ವಿಷ ಬಿತ್ತುತ್ತಿದ್ದಾರೆ. ಹದಿನೇಳು ಬಾರಿ ಬಜೆಟ್ ಮಂಡಿಸಿದ ನಾಯಕನ ಸಮುದಾಯವನ್ನು ‘ಅಲೆಮಾರಿ’ ಎನ್ನುವ ಮೂಲಕ ನೀವು ಇಡೀ ಹಿಂದುಳಿದ ವರ್ಗಕ್ಕೆ ಸವಾಲು ಹಾಕಿದ್ದೀರಿ.
ಅಂತರಾತ್ಮಕ್ಕೆ ಕೇಳಿಕೊಳ್ಳಿ…
ಇತರರ ಜಾತಿ, ವೇಷಭೂಷಣ ಮತ್ತು ವೃತ್ತಿಯನ್ನು ವ್ಯಂಗ್ಯ ಮಾಡುವ ಮೊದಲು, ನಿಮ್ಮ ಸುತ್ತಲಿರುವ ಕಳಂಕಿತರ ಮುಖಗಳನ್ನು ಒಮ್ಮೆ ನೋಡಿ. ಅಧಿಕಾರದ ಅಮಲಿನಲ್ಲಿ ಅಕ್ಕಪಕ್ಕದ ಸಮುದಾಯಗಳನ್ನು ಶತ್ರುಗಳಂತೆ ಕಾಣುವ ನಿಮ್ಮ ಈ ನಡವಳಿಕೆ ದೀರ್ಘಕಾಲ ನಡೆಯದು. ಕುರುಬ ಸಮಾಜವನ್ನು ‘ಟೂರ್’ ಎಂದು ಅವಮಾನಿಸಿದ ನಿಮಗೆ, ಈಗ ಅಧರ್ಮದ ಹಾದಿ ಹಿಡಿದ ವ್ಯಕ್ತಿಯ ಬೆಂಬಲಕ್ಕೆ ನಿಂತಿದ್ದಕ್ಕಾಗಿ ಯಾವ ಹೆಸರು ನೀಡಬೇಕು ಎಂಬುದನ್ನು ನೀವೇ ನಿರ್ಧರಿಸಿಕೊಳ್ಳಿ.
ನೆನಪಿರಲಿ, ಅಸೂಯೆ ಎನ್ನುವುದು ಮನುಷ್ಯನನ್ನು ಸುಡುತ್ತದೆ, ಆದರೆ ಸಮಾಜದ ಸ್ವಾಭಿಮಾನ ಆ ಅಸೂಯೆಯನ್ನು ಮಣ್ಣುಪಾಲು ಮಾಡುತ್ತದೆ.
– ಸಮಾಜದ ಜಾಗೃತ ಧ್ವನಿ.

