Friday, September 11, 2026
Home ಉಪಯುಕ್ತ ಮಾಹಿತಿ Shakti Yojana: ಮಹಿಳೆಯರೇ ಎಚ್ಚರ! ಬಸ್ ಫ್ರೀ ಬೇಕಂದ್ರೆ ಆಧಾರ್ ಸಾಲದು; ಹೊಸ ರೂಲ್ಸ್ ಹೀಗಿದೆ!

Shakti Yojana: ಮಹಿಳೆಯರೇ ಎಚ್ಚರ! ಬಸ್ ಫ್ರೀ ಬೇಕಂದ್ರೆ ಆಧಾರ್ ಸಾಲದು; ಹೊಸ ರೂಲ್ಸ್ ಹೀಗಿದೆ!

Shakti Yojana

ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ ಜೊತೆಗೆ ಒಂದು ಬಿಗ್ ಅಪ್‌ಡೇಟ್ ಸಿಕ್ಕಿದೆ! ಇನ್ಮುಂದೆ Shakti Yojana ಮೂಲಕ ಸರ್ಕಾರಿ ಬಸ್‌ಗಳಲ್ಲಿ ಫ್ರೀಯಾಗಿ ಓಡಾಡಲು ಬರೀ ಆಧಾರ್ ಕಾರ್ಡ್ ತೋರಿಸಿದರೆ ಸಾಲದು. ಅದರ ಜಾಗಕ್ಕೆ ಈಗ ಹೊಚ್ಚ ಹೊಸ ‘ಶಕ್ತಿ ಸ್ಮಾರ್ಟ್ ಕಾರ್ಡ್’ ಎಂಟ್ರಿ ಕೊಡುತ್ತಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಈ ಮಹತ್ವದ ನಿರ್ಧಾರಕ್ಕೆ ಅಸ್ತು ಎಂದಿದ್ದಾರೆ.

ಏನಿದು ಹೊಸ ನಿಯಮ? ಯಾಕೆ ಈ ಬದಲಾವಣೆ?

Shakti Yojana ಜಾರಿಯಾದಾಗಿನಿಂದ ಮಹಿಳೆಯರು ಆಧಾರ್ ಕಾರ್ಡ್ ತೋರಿಸಿಯೇ ಪ್ರಯಾಣ ಮಾಡುತ್ತಿದ್ದರು. ಆದರೆ, ಇದರಿಂದ ಎಷ್ಟು ಜನ ಪ್ರಯಾಣಿಸುತ್ತಿದ್ದಾರೆ ಮತ್ತು ನಿಗಮಗಳಿಗೆ ಆಗುತ್ತಿರುವ ನಷ್ಟದ ನಿಖರ ಲೆಕ್ಕ ಸಿಗುವುದು ಕಷ್ಟವಾಗುತ್ತಿತ್ತು. ಈ ಗೊಂದಲಕ್ಕೆ ಇತಿಶ್ರೀ ಹಾಡಲು ಸರ್ಕಾರ ಈಗ ‘ಸ್ಮಾರ್ಟ್ ಕಾರ್ಡ್’ ಮೊರೆ ಹೋಗಿದೆ.

ಹೊಸ ನಿಯಮದ ಹೈಲೈಟ್ಸ್:

  • ನಾಲ್ಕು ನಿಗಮಗಳಿಂದ ಕಾರ್ಡ್: ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳ ವತಿಯಿಂದಲೇ ಈ ಸ್ಮಾರ್ಟ್ ಕಾರ್ಡ್ ವಿತರಣೆಯಾಗಲಿದೆ.
  • ಆಧಾರ್‌ಗೆ ಬ್ರೇಕ್: ಕಾರ್ಡ್ ವಿತರಣೆ ಪೂರ್ಣಗೊಂಡ ನಂತರ, ಆಧಾರ್ ಕಾರ್ಡ್ ತೋರಿಸಿ ಪ್ರಯಾಣಿಸುವ ಹಳೇ ಪದ್ಧತಿ ನಿಲ್ಲಲಿದೆ.
    ಪಾರದರ್ಶಕತೆ: ಯಾರು ಎಷ್ಟು ಬಾರಿ ಪ್ರಯಾಣಿಸುತ್ತಾರೆ ಎಂಬ ನಿಖರ ಮಾಹಿತಿ ಸರ್ಕಾರದ ಬಳಿ ಇರಲಿದೆ.

ಇದನ್ನೂ ಓದಿ: ‘ನಾ ಖಾವುಂಗಾ’ ಎನ್ನುತ್ತ ಸಾವಿರಾರು ಕೋಟಿ ಹಣ ಗುಳುಂ? ಮೋದಿಯವರ ‘ಸೀಕ್ರೆಟ್’ ಆಟ ಬಯಲು!

ಸಚಿವ ಸಂಪುಟದಲ್ಲಿ ಇನ್ನೂ ಇವೆ ಹಲವು ಗಿಫ್ಟ್!

ಕೇವಲ ಬಸ್ ಪ್ರಯಾಣ ಅಷ್ಟೇ ಅಲ್ಲ, ಸಾರ್ವಜನಿಕರಿಗೆ ಅನುಕೂಲವಾಗುವ ಇನ್ನೂ ಹಲವು ಪ್ಲಾನ್‌ಗಳಿಗೆ ಸರ್ಕಾರ ಸಮ್ಮತಿ ನೀಡಿದೆ:

1. ಮಕ್ಕಳಿಗೆ ಶೂ-ಸಾಕ್ಸ್ ಭಾಗ್ಯ: ಸರ್ಕಾರಿ ಶಾಲಾ ಮಕ್ಕಳಿಗೆ ಈ ವರ್ಷವೂ ಯಾವುದೇ ಅಡೆತಡೆಯಿಲ್ಲದೆ ಉಚಿತ ಶೂ ಮತ್ತು ಸಾಕ್ಸ್ ನೀಡಲು ಸರ್ಕಾರ ಹಣ ಬಿಡುಗಡೆ ಮಾಡಿದೆ.

2. ರೇಸ್ ಕೋರ್ಸ್ ಶಿಫ್ಟ್: ಬೆಂಗಳೂರಿನ ಟ್ರಾಫಿಕ್ ಹಾಗೂ ಸ್ಥಳದ ಅಭಾವದಿಂದಾಗಿ ರೇಸ್ ಕೋರ್ಸ್ ಅನ್ನು ನಗರದಿಂದ ಹೊರಗಿನ ಕುಣಿಗಲ್‌ಗೆ ಸ್ಥಳಾಂತರಿಸಲು ಗ್ರೀನ್ ಸಿಗ್ನಲ್ ಸಿಕ್ಕಿದೆ.

3. ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ: ಬಡವರಿಗೆ ಉಚಿತ ಮತ್ತು ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲು ಹೊಸದಾಗಿ ಸುಸಜ್ಜಿತ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಲು ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ.

ಓದುಗರೇ ನೆನಪಿರಲಿ..

ಸದ್ಯಕ್ಕೆ ನೀವು ಆಧಾರ್ ಕಾರ್ಡ್ ಮೂಲಕವೇ ಪ್ರಯಾಣಿಸಬಹುದು. ಸರ್ಕಾರ ಸ್ಮಾರ್ಟ್ ಕಾರ್ಡ್ ಹಂಚುವ ಪ್ರಕ್ರಿಯೆ ಆರಂಭಿಸಿದಾಗ, ನೀವು ಅರ್ಜಿ ಸಲ್ಲಿಸಿ ಅದನ್ನು ಪಡೆದುಕೊಳ್ಳಬೇಕಾಗುತ್ತದೆ. ಅರ್ಜಿ ಸಲ್ಲಿಸುವುದು ಹೇಗೆ ಎಂಬ ಕಂಪ್ಲೀಟ್ ಮಾಹಿತಿ ಪ್ರಕಟವಾದ ತಕ್ಷಣ ನಾವು ‘ಅಸಲಿ ಸುದ್ದಿ’ಯಲ್ಲಿ ನಿಮಗೆ ತಿಳಿಸುತ್ತೇವೆ.

ಇಂಥಹ ಲೇಟೆಸ್ಟ್ ಮಾಹಿತಿಗಳಿಗಾಗಿ ‘ಅಸಲಿ ಸುದ್ದಿ’ ಓದುತ್ತಿರಿ, ಶೇರ್ ಮಾಡಿ.

ಸ್ವತಂತ್ರ ಮಾಧ್ಯಮ ಬೆಂಬಲಿಸಿ

ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...