Bigg Boss ಕನ್ನಡ ಸೀಸನ್ 12 ಮುಗಿದರೂ ಅದರ ಸದ್ದು ಮಾತ್ರ ಇನ್ನು ಕಡಿಮೆಯಾಗಿಲ್ಲ. ಈ ಬಾರಿ ರನ್ನರ್ ಅಪ್ ಆಗಿ ಹೊರಬಂದ ಕರಾವಳಿ ಬೆಡಗಿ ರಕ್ಷಿತಾ ಶೆಟ್ಟಿ ಈಗ ಎಲ್ಲೆಡೆ ಸುದ್ದಿಯಲ್ಲಿದ್ದಾರೆ. ಆದರೆ ಈಗ ವಿಷಯ ರಕ್ಷಿತಾ ಅವರ ಆಟದ ಬಗ್ಗೆ ಅಲ್ಲ, ಬದಲಾಗಿ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಅವರು ಕೊಟ್ಟ ಮಾತಿನ ಬಗ್ಗೆ!
ಕೊಟ್ಟ ಮಾತು ಉಳಿಸಿಕೊಂಡ ವರ್ತೂರು!
ಹೌದು, Bigg Boss ಸೀಸನ್ 10ರ ಖ್ಯಾತ ಸ್ಪರ್ಧಿ ವರ್ತೂರು ಸಂತೋಷ್ ಈ ಬಾರಿ ಒಂದು ಭರ್ಜರಿ ಘೋಷಣೆ ಮಾಡಿದ್ದರು. “ಸೀಸನ್ 12ರ ರನ್ನರ್ ಅಪ್ ಆಗುವವರಿಗೆ ನಾನು ಹಣದ ಬಹುಮಾನ ನೀಡುತ್ತೇನೆ” ಎಂದು ಅವರು ಭರವಸೆ ನೀಡಿದ್ದರು. ಅಂದಿನ ಆ ಮಾತನ್ನು ಈಗ ವರ್ತೂರು ನಿಜ ಮಾಡಿದ್ದಾರೆ.
ಆಗಿದ್ದೇನು?
Bigg Boss ಮಾಜಿ ಸ್ಪರ್ಧಿ ಮೊದಲು ವರ್ತೂರು ಅವರು ಒಂದು ದೊಡ್ಡ ಆಫರ್ ಇಟ್ಟಿದ್ದರು. Bigg Boss ರನ್ನರ್ ಅಪ್ ಆದವರಿಗೆ 10 ಲಕ್ಷ ರೂಪಾಯಿ ನೀಡುವುದಾಗಿ ಹೇಳಿದ್ದರು. ಆದರೆ ಅದಕ್ಕೊಂದು ಶರತ್ತು ಇತ್ತು – ತಮ್ಮ ಪ್ರೀತಿಯ ಹಳ್ಳಿಕಾರ್ ಹಸುವನ್ನು ಬಿಗ್ ಬಾಸ್ ವೇದಿಕೆಯ ಮೇಲೆ ತರಲು ಅವಕಾಶ ನೀಡಬೇಕು ಎಂಬುದು. ಆದರೆ ತಾಂತ್ರಿಕ ಕಾರಣಗಳಿಂದ ಬಿಗ್ ಬಾಸ್ ತಂಡ ಇದಕ್ಕೆ ಒಪ್ಪದಿದ್ದಾಗ, ವರ್ತೂರು ಅವರು ತಮ್ಮ ನಿರ್ಧಾರವನ್ನು ತುಸು ಬದಲಿಸಿ, ಮೊದಲ ರನ್ನರ್ ಅಪ್ಗೆ 2 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದ್ದರು.
ಇದನ್ನೂ ಓದಿ: Gilli: ಬಿಗ್ ಬಾಸ್ ಪಳಾರ್ಗೆ ಸಂಕಷ್ಟ! ಅವಕಾಶ ಕೊಟ್ಟ ನಿರ್ಮಾಪಕರನ್ನೇ ಮರೆತರಾ ಗಿಲ್ಲಿ?
ರಕ್ಷಿತಾಗೆ ಶಾಕ್ ಮೇಲೆ ಶಾಕ್!
ಈಗ Bigg Boss ಮನೆಯಿಂದ ಹೊರಬಂದಿರುವ ರಕ್ಷಿತಾ ಶೆಟ್ಟಿಗೆ ಸ್ವತಃ ವರ್ತೂರು ಸಂತೋಷ್ ಕರೆ ಮಾಡಿದ್ದಾರೆ. “ನಾನು ಕೊಟ್ಟ ಮಾತು ಉಳಿಸಿಕೊಳ್ಳುತ್ತೇನೆ, ಬೆಂಗಳೂರಿಗೆ ಬಂದಾಗ ನನ್ನನ್ನು ಭೇಟಿ ಮಾಡು. ನನ್ನ ತಾಯಿಯ ಕೈಯಿಂದಲೇ ನಿನಗೆ ಆ 2 ಲಕ್ಷ ರೂಪಾಯಿ ಬಹುಮಾನ ಕೊಡಿಸುತ್ತೇನೆ” ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, “ಬರುವಾಗ ನಿನ್ನ ಅಪ್ಪ-ಅಮ್ಮನನ್ನು ಕರೆದುಕೊಂಡು ಬಾ, ನಿನಗೆ ಇಷ್ಟವಾದ ಮೀನಿನ ಅಡುಗೆ ಮಾಡಿಸಿ ಊಟ ಹಾಕುತ್ತೇವೆ” ಎಂದು ಪ್ರೀತಿಯಿಂದ ಆಹ್ವಾನಿಸಿದ್ದಾರೆ.
ಗೊಂದಲದಲ್ಲಿ ಕರಾವಳಿ ಬೆಡಗಿ!
ತಮಾಷೆಯ ವಿಷಯ ಏನೆಂದರೆ, ವರ್ತೂರು ಸಂತೋಷ್ ಫೋನ್ ಮಾಡಿದಾಗ ರಕ್ಷಿತಾ ಶೆಟ್ಟಿ ಸ್ವಲ್ಪ ಕನ್ಫ್ಯೂಸ್ ಆಗಿದ್ದರು! ಬಹುಶಃ ರಕ್ಷಿತಾಗೆ ವರ್ತೂರು ಯಾರು ಅಥವಾ ಅವರು ಈ ಹಿಂದೆ ಮಾಡಿದ್ದ ಘೋಷಣೆಗಳ ಬಗ್ಗೆ ಸರಿಯಾಗಿ ತಿಳಿದಿರಲಿಲ್ಲ ಅನಿಸುತ್ತದೆ. ಹಾಗಾಗಿ, “ಸರಿ ಬರ್ತೀವಿ” ಎಂದು ಒಪ್ಪಿಕೊಂಡಿದ್ದರೂ, ರಕ್ಷಿತಾ ಅವರ ಮಾತಿನಲ್ಲಿ ಒಂದು ರೀತಿಯ ಅಚ್ಚರಿ ಮತ್ತು ಗೊಂದಲ ಎದ್ದು ಕಾಣುತ್ತಿತ್ತು.
ಒಟ್ಟಿನಲ್ಲಿ, ಬಿಗ್ ಬಾಸ್ ಮನೆಯ ಒಳಗಷ್ಟೇ ಅಲ್ಲ, ಹೊರಗೆ ಬಂದ ಮೇಲೂ ರಕ್ಷಿತಾ ಶೆಟ್ಟಿಗೆ ಅದೃಷ್ಟ ಒಲಿದು ಬರುತ್ತಿದೆ. ವರ್ತೂರು ಸಂತೋಷ್ ಅವರ ಈ ದೊಡ್ಡ ಗುಣಕ್ಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

