Homeಉಪಯುಕ್ತ ಮಾಹಿತಿKarnataka Budget Highlights: 5ನೇ ಗ್ಯಾರಂಟಿಗೆ ಕೊಕ್? ಮದ್ಯಪ್ರಿಯರಿಗೆ ಶಾಕ್, ಬೆಂಗಳೂರಿಗೆ ಟನಲ್ ರೋಡ್ ಗಿಫ್ಟ್!

Karnataka Budget Highlights: 5ನೇ ಗ್ಯಾರಂಟಿಗೆ ಕೊಕ್? ಮದ್ಯಪ್ರಿಯರಿಗೆ ಶಾಕ್, ಬೆಂಗಳೂರಿಗೆ ಟನಲ್ ರೋಡ್ ಗಿಫ್ಟ್!

Karnataka Budget Highlights:

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ 2026-27ನೇ ಸಾಲಿನ ಕರ್ನಾಟಕ ಬಜೆಟ್ ಅನ್ನು ಮಂಡಿಸಿದ್ದು, ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡದಾದ 4.48 ಲಕ್ಷ ಕೋಟಿ ರೂ. ಮೊತ್ತದ ಆಯವ್ಯಯವನ್ನು ಘೋಷಿಸಿದ್ದಾರೆ. ಈ ಬಜೆಟ್‌ನಲ್ಲಿ ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯಕ್ಕೆ ಆದ್ಯತೆ ನೀಡಲಾಗಿದ್ದರೂ, ರಾಜ್ಯದ ಒಟ್ಟು ಸಾಲದ ಹೊರೆ 8.24 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿರುವುದು ಆತಂಕ ಮೂಡಿಸಿದೆ. ವಿಶೇಷವಾಗಿ, ಐದು ಗ್ಯಾರಂಟಿಗಳಲ್ಲಿ ಒಂದಾದ ‘ಯುವನಿಧಿ’ಗೆ ಈ ಬಾರಿ ಅನುದಾನ ಮೀಸಲಿಡದಿರುವುದು ಮತ್ತು ಹೊಸ ಮದ್ಯ ನೀತಿಯ ಮೂಲಕ ಬೆಲೆ ನಿರ್ಧಾರವನ್ನು ಕಂಪನಿಗಳಿಗೆ ಬಿಟ್ಟಿರುವುದು ಜನಸಾಮಾನ್ಯರಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಅಸಲಿ ಸುದ್ದಿಯ ಈ ವಿಶೇಷ ವರದಿಯಲ್ಲಿ ಬಜೆಟ್‌ನ ಪ್ರತಿಯೊಂದು ಅಂಕಿ-ಅಂಶ ಹಾಗೂ ನಿಮ್ಮ ಜೇಬಿಗೆ ಆಗುವ ಲಾಭ-ನಷ್ಟದ ಪೂರ್ಣ ಮಾಹಿತಿ ಇಲ್ಲಿದೆ.

ಕರ್ನಾಟಕ ಬಜೆಟ್ 2026-27: ಸಮಗ್ರ ಅಂಕಿ-ಅಂಶಗಳ ವರದಿ

ಹಣಕಾಸಿನ ಹಂಚಿಕೆಯ ಪೂರ್ಣ ವಿವರ (ಪೈಸೆ ಲೆಕ್ಕಾಚಾರದಲ್ಲಿ):

ಸರ್ಕಾರದ ಪ್ರತಿ 1 ರೂಪಾಯಿ ಖರ್ಚು ಈ ಕೆಳಗಿನಂತಿದೆ:

  • ಸಾಲ ಮರುಪಾವತಿ: 20 ಪೈಸೆ (20%).
  • ಸಂಬಳ ಮತ್ತು ಪೆನ್ಷನ್: 18 ಪೈಸೆ (18%).
  • ಸಮಾಜ ಕಲ್ಯಾಣ: 15 ಪೈಸೆ.
  • ಆರ್ಥಿಕ ಸೇವೆಗಳು: 14 ಪೈಸೆ.
  • ಕೃಷಿ ಮತ್ತು ನೀರಾವರಿ: 13 ಪೈಸೆ.
  • ಶಿಕ್ಷಣ: 10 ಪೈಸೆ.
  • ಆರೋಗ್ಯ: 4 ಪೈಸೆ.
  • ನೀರು ಸರಬರಾಜು: 3 ಪೈಸೆ.

ಇದನ್ನೂ ಓದಿ: Diplomatic Surrender: ಅಮೆರಿಕದ ‘ತೈಲ ಭಿಕ್ಷೆ’: ಭಾರತವೀಗ ವಾಷಿಂಗ್ಟನ್‌ನ ಗುಲಾಮಿ ರಾಷ್ಟ್ರವೇ?

ಇಲಾಖಾವಾರು ಟಾರ್ಗೆಟ್ (ಹಣ ಸಂಗ್ರಹದ ಗುರಿ):

ಸರ್ಕಾರ ಈ ವರ್ಷ ತೆರಿಗೆಯ ಮೂಲಕ ಇಷ್ಟು ಹಣ ವಸೂಲಿ ಮಾಡುವ ಗುರಿ ಇಟ್ಟುಕೊಂಡಿದೆ:

  • ವಾಣಿಜ್ಯ ತೆರಿಗೆ: 1,25,000 ಕೋಟಿ ರೂ.
  • ಅಬಕಾರಿ (ಮದ್ಯ): 45,000 ಕೋಟಿ ರೂ.
  • ನೋಂದಣಿ ಮತ್ತು ಮುದ್ರೆ (Registration): 29,000 ಕೋಟಿ ರೂ.
  • ಮೋಟಾರ್ ವಾಹನ ತೆರಿಗೆ: 15,500 ಕೋಟಿ ರೂ.

ಗ್ಯಾರಂಟಿ ಯೋಜನೆಗಳ ಒಳನೋಟ:

  • ಯುವನಿಧಿ:ಕಳೆದ ವರ್ಷ 600 ಕೋಟಿ ರೂ. ಇಟ್ಟಿದ್ದರು, ಈ ಬಾರಿ 0 (ಶೂನ್ಯ) ಹಂಚಿಕೆ ಮಾಡಲಾಗಿದೆ.
  • ಅನ್ನಭಾಗ್ಯ: ಕಳೆದ ಬಾರಿಗಿಂತ 200 ಕೋಟಿ ರೂ. ಕಡಿತ ಮಾಡಲಾಗಿದೆ (ಒಟ್ಟು 6,200 ಕೋಟಿ ರೂ.).

ಜಿಲ್ಲಾವಾರು ಮತ್ತು ವಿಶೇಷ ಯೋಜನೆಗಳು:

  • ಕಲ್ಯಾಣ ಕರ್ನಾಟಕ (KKRDB): 5,000 ಕೋಟಿ ರೂ. (ಕಳೆದ ಬಾರಿಯಷ್ಟೇ ಉಳಿಸಿಕೊಳ್ಳಲಾಗಿದೆ).
  • ಮೀನುಗಾರರು: ಮೀನುಗಾರಿಕೆ ಕಿಟ್ ಖರೀದಿಗೆ ನೀಡುತ್ತಿದ್ದ ಸಹಾಯಧನ 10,000 ರಿಂದ 20,000 ರೂ.ಗೆ ಏರಿಕೆ (ಡಬಲ್ ಮಾಡಲಾಗಿದೆ).
  • ರಸ್ತೆ ಅಭಿವೃದ್ಧಿ: ‘ಪ್ರಗತಿಪಥ’ ಯೋಜನೆಯಡಿ 5,190 ಕೋಟಿ ರೂ. ಮೊತ್ತದ ಕಾಮಗಾರಿ, ಈ ವರ್ಷ 500 ಕೋಟಿ ರೂ. ಖರ್ಚು.
  • ವೃಷಭಾವತಿ ವ್ಯಾಲಿ: ಬೆಂಗಳೂರು ಸುತ್ತಮುತ್ತಲಿನ 119 ಕೆರೆ ತುಂಬಿಸಲು 650 ಕೋಟಿ ರೂ.
  • ಗದಗ-ಲಕ್ಕುಂಡಿ: ಪ್ರವಾಸೋದ್ಯಮ ಸರ್ಕ್ಯೂಟ್ ಆಗಿ ಅಭಿವೃದ್ಧಿ.

ಇದನ್ನೂ ಓದಿ: BJP Strategy: ಮೈತ್ರಿ ಎಂಬ ‘ಸ್ಲೋ ಪಾಯ್ಸನ್’; ಮಿತ್ರಪಕ್ಷಗಳ ಸಮಾಧಿಯ ಮೇಲೆ ಬಿಜೆಪಿ ಸಾಮ್ರಾಜ್ಯ?

ಶಿಕ್ಷಣ ಮತ್ತು ತಂತ್ರಜ್ಞಾನ:

  • ಲ್ಯಾಪ್ಟಾಪ್ ವಿತರಣೆ: ಅಲ್ಪಸಂಖ್ಯಾತ ಇಲಾಖೆಯ 5,000 ವಿದ್ಯಾರ್ಥಿಗಳಿಗೆ ತಲಾ 50,000 ರೂ. ಮೌಲ್ಯದ ಲ್ಯಾಪ್ಟಾಪ್.
  • ಡಿಜಿಟಲ್ ಲೈಬ್ರರಿ: ಧಾರವಾಡ ಮತ್ತು ಬೆಂಗಳೂರಿನಲ್ಲಿ 10 ಕೋಟಿ ರೂ. ವೆಚ್ಚದ ಹೈಟೆಕ್ ಲೈಬ್ರರಿ.
  • ಮಹಿಳಾ ಅತಿಥಿ ಉಪನ್ಯಾಸಕರು: 90 ದಿನಗಳ ಮಾತೃತ್ವ ರಜೆ ಘೋಷಣೆ.

ಆರೋಗ್ಯದ ವಿಶೇಷ:

  • ಅಂಗಾಂಗ ಕಸಿ ಆಸ್ಪತ್ರೆ: ಬೆಂಗಳೂರಿನ ಅಜೀಂ ಪ್ರೇಮ್‌ಜಿ ಫೌಂಡೇಶನ್ ಸಹಯೋಗದಲ್ಲಿ 1,000 ಬೆಡ್‌ಗಳ ಬೃಹತ್ ಆಸ್ಪತ್ರೆ.
  • ಕ್ಯಾನ್ಸರ್ ಸೆಂಟರ್: ಮೈಸೂರು ಮತ್ತು ತುಮಕೂರಿನಲ್ಲಿ 92 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆ.

ಧಾರ್ಮಿಕ ಮತ್ತು ಸಾಮಾಜಿಕ:

  • ವಕ್ಫ್ ಆಸ್ತಿ: ರಕ್ಷಣೆಗೆ 100 ಕೋಟಿ ರೂ.
  • ಗ್ರಾಮ ಪಂಚಾಯಿತಿ: ಎಲ್ಲಾ ಪಂಚಾಯಿತಿಗಳ ಹೆಸರು ಇನ್ಮುಂದೆ ‘ಮಹಾತ್ಮಾ ಗಾಂಧಿ ಗ್ರಾಮ ಪಂಚಾಯಿತಿ’.

ಬಜೆಟ್‌ನ ಬೃಹತ್ ಗಾತ್ರ ಮತ್ತು ಆರ್ಥಿಕ ಸ್ಥಿತಿ:

  • ಒಟ್ಟು ಬಜೆಟ್ ಮೊತ್ತ: 4,48,484 ಕೋಟಿ ರೂ. (ಕಳೆದ ವರ್ಷಕ್ಕಿಂತ 38,455 ಕೋಟಿ ರೂ. ಅಧಿಕ).
  • ರಾಜ್ಯದ ಒಟ್ಟು ಸಾಲ: 2026-27ರ ಅಂತ್ಯಕ್ಕೆ 8.24 ಲಕ್ಷ ಕೋಟಿ ರೂ. ತಲುಪುವ ಅಂದಾಜು.
  • ತಲಾ ಸಾಲದ ಹೊರೆ: ರಾಜ್ಯದ ಪ್ರತಿಯೊಬ್ಬ ಪ್ರಜೆಯ ಮೇಲೆ 1,17,000 ರೂ. ಸಾಲವಿದೆ. ಈ ವರ್ಷವೊಂದರಲ್ಲೇ ಸರ್ಕಾರ 3,20,000 ಕೋಟಿ ರೂ. ಸಾಲ ಮಾಡಲು ಯೋಜಿಸಿದೆ.
  • ಜಿಡಿಪಿ ಬೆಳವಣಿಗೆ: ಕಳೆದ ವರ್ಷ 9.4% ಇದ್ದ ಬೆಳವಣಿಗೆ ದರ ಈ ಬಾರಿ 8.1% ಕ್ಕೆ ಕುಸಿದಿದೆ.

ಪಂಚ ಗ್ಯಾರಂಟಿಗಳ ಲೆಕ್ಕಾಚಾರ (ಒಟ್ಟು 50,686 ಕೋಟಿ ರೂ.):

  • ಗೃಹಲಕ್ಷ್ಮಿ: 28,608 ಕೋಟಿ ರೂ. (ಅತಿ ಹೆಚ್ಚು ವೆಚ್ಚದ ಯೋಜನೆ).
  • ಗೃಹಜ್ಯೋತಿ: 10,278 ಕೋಟಿ ರೂ.
  • ಶಕ್ತಿ ಯೋಜನೆ: 5,300 ಕೋಟಿ ರೂ.
  • ಅನ್ನಭಾಗ್ಯ: 6,200 ಕೋಟಿ ರೂ. (ಇನ್ನು ಮುಂದೆ ಅಕ್ಕಿ ಜೊತೆ ಬೇಳೆ, ಎಣ್ಣೆ, ಸಕ್ಕರೆ ಒಳಗೊಂಡ ‘ಇಂದಿರಾ ಕಿಟ್’ ವಿತರಣೆ).
  • ಯುವನಿಧಿ: ಈ ಬಜೆಟ್‌ನಲ್ಲಿ ಹೊಸದಾಗಿ ಯಾವುದೇ ಹಣ ಮೀಸಲಿಟ್ಟಿಲ್ಲ (Zero Allocation), ಇದು ಆತಂಕ ಮೂಡಿಸಿದೆ.

ಶಿಕ್ಷಣ ಮತ್ತು ಯುವಜನತೆ:

  • ಒಟ್ಟು ಹಂಚಿಕೆ: 47,224 ಕೋಟಿ ರೂ.
  • ಸೋಶಿಯಲ್ ಮೀಡಿಯಾ ಬ್ಯಾನ್: 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿರ್ಬಂಧಿಸಲು ಹೊಸ ಕಾನೂನು.
  • ಶಿಕ್ಷಕರ ನೇಮಕಾತಿ: ಈ ವರ್ಷವೇ 15,000 ಶಿಕ್ಷಕರ ಹುದ್ದೆ ಭರ್ತಿ.
  • ರೋಹಿತ್ ವೇಮುಲ ಕಾಯ್ದೆ: ಕಾಲೇಜುಗಳಲ್ಲಿ ಜಾತಿ ನಿಂದನೆ ತಡೆಯಲು ಹೊಸ ಕಾಯ್ದೆ ಮತ್ತು ನಿಂತುಹೋಗಿದ್ದ ಕಾಲೇಜು ಎಲೆಕ್ಷನ್ ಪುನಾರಂಭ.
  • ಉಚಿತ ಪುಸ್ತಕ: 1ರಿಂದ 12ನೇ ತರಗತಿ ಮಕ್ಕಳಿಗೆ ಮೌಲ್ಯ ಶಿಕ್ಷಣ ಪುಸ್ತಕ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಉಚಿತ.
  • AI ತರಬೇತಿ: 8ರಿಂದ 12ನೇ ತರಗತಿ ಮಕ್ಕಳಿಗೆ ಐಐಟಿ ಧಾರವಾಡ ಸಹಯೋಗದಲ್ಲಿ ಎಐ ತರಬೇತಿ.

ಕೃಷಿ, ನೀರಾವರಿ ಮತ್ತು ಪಶುಸಂಗೋಪನೆ:

  • ಕೃಷಿ ಇಲಾಖೆ: 8,373 ಕೋಟಿ ರೂ.
  • ರೈತರಿಗೆ ಸಾಲ: 37 ಲಕ್ಷ ರೈತರಿಗೆ 28,000 ಕೋಟಿ ರೂ. ಸಾಲ ವಿತರಣೆಯ ಗುರಿ.
  • ಕೃಷ್ಣ ಮೇಲ್ದಂಡೆ ಯೋಜನೆ: ಭೂಸ್ವಾಧೀನ ಪರಿಹಾರ ಮೊತ್ತ ನಿಗದಿ (ಕುಷ್ಕಿ-30 ಲಕ್ಷ, ತರಿ-40 ಲಕ್ಷ ಪ್ರತಿ ಎಕರೆಗೆ).
  • ಟಿಬಿ ಡ್ಯಾಮ್: ತುಂಗಭದ್ರ ಜಲಾಶಯದ ಎಲ್ಲಾ 33 ಗೇಟ್‌ಗಳ ಬದಲಾವಣೆ.
  • ವಸುಧಾಮೃತ: ಮಲೆನಾಡು/ಕರಾವಳಿಯ ಅಡಿಕೆ ರೋಗ ತಡೆಗೆ 10 ಕೋಟಿ ರೂ. ಪ್ಯಾಕೇಜ್.
  • ಪಶುಸಂಗೋಪನೆ: ಹಸು, ಎಮ್ಮೆ ಖರೀದಿಗೆ 25% ಸಬ್ಸಿಡಿ (ಬೆಳಗಾವಿ, ಕಲಬುರ್ಗಿ ಭಾಗದ 10,000 ಜನರಿಗೆ).

ಆರೋಗ್ಯ ಕ್ಷೇತ್ರ:

  • ಉಚಿತ ಇನ್ಸುಲಿನ್ ಪೆನ್: ಟೈಪ್-1 ಡಯಾಬಿಟಿಸ್ ಇರುವ 18 ವರ್ಷದೊಳಗಿನ ಮಕ್ಕಳಿಗೆ ಉಚಿತ ಪೆನ್.
  • ಐವಿಎಫ್ ಕೇಂದ್ರ: ಬೆಂಗಳೂರಿನ ವಾಣಿ ವಿಲಾಸ್ ಮತ್ತು ಕಲಬುರ್ಗಿಯ ಜಿಮ್ಸ್‌ನಲ್ಲಿ ಉಚಿತ ಐವಿಎಫ್ ಸೌಲಭ್ಯ.
  • ಆಸ್ಪತ್ರೆಗಳ ಮೇಲ್ದರ್ಜೆ: ಹುಬ್ಬಳ್ಳಿಯಲ್ಲಿ ಜಯದೇವ ಆಸ್ಪತ್ರೆ ಆರಂಭ, ಮೈಸೂರು ಜಯದೇವ 600 ಬೆಡ್‌ಗಳಿಗೆ ಏರಿಕೆ.
  • ಹೆಸರು ಬದಲಾವಣೆ: ವಿಕ್ಟೋರಿಯಾ ಆಸ್ಪತ್ರೆ ಇನ್ಮುಂದೆ ‘ಶಾಂತವೇರಿ ಗೋಪಾಲಗೌಡ ಆಸ್ಪತ್ರೆ’.

ಬೆಂಗಳೂರು ಮತ್ತು ಇನ್ಫ್ರಾಸ್ಟ್ರಕ್ಚರ್:

  • ಟನಲ್ ರೋಡ್: 30,000 ಕೋಟಿ ರೂ. ವೆಚ್ಚದಲ್ಲಿ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ವರೆಗೆ ಸುರಂಗ ರಸ್ತೆ.
  • ರಸ್ತೆ ಅಭಿವೃದ್ಧಿ: ಪಿಡಬ್ಲ್ಯೂಡಿ ಇಲಾಖೆಯಡಿ ರಾಜ್ಯದ ಹೆದ್ದಾರಿಗಳಿಗೆ 35,000 ಕೋಟಿ ರೂ. ಹೂಡಿಕೆ.
  • ರೈಲ್ವೆ: ರಾಜ್ಯದ 9 ಪ್ರಮುಖ ರೈಲ್ವೆ ಯೋಜನೆಗಳಿಗೆ 50% ವೆಚ್ಚ ಭರಿಸಲು ಸರ್ಕಾರ ಸಮ್ಮತಿ.

ಮದ್ಯ ಮತ್ತು ಅಬಕಾರಿ ನೀತಿ:

  • ಹೊಸ ಮದ್ಯ ನೀತಿ: ಸರ್ಕಾರ ಇನ್ಮುಂದೆ ಬೆಲೆ ಫಿಕ್ಸ್ ಮಾಡಲ್ಲ; ಕಂಪನಿಗಳೇ ನಿರ್ಧರಿಸಲಿವೆ.
  • ಕಿಕ್ ಆಧಾರಿತ ಟ್ಯಾಕ್ಸ್: ಆಲ್ಕೋಹಾಲ್ ಪ್ರಮಾಣ ಹೆಚ್ಚಿದ್ದರೆ ತೆರಿಗೆ ಹೆಚ್ಚು.
  • ಅಬಕಾರಿ ಟಾರ್ಗೆಟ್: ಮದ್ಯಪ್ರಿಯರಿಂದ ಈ ವರ್ಷ 45,000 ಕೋಟಿ ರೂ. ಸಂಗ್ರಹಿಸುವ ಗುರಿ.

ಇದನ್ನೂ ಓದಿ: Sensational: ಸದ್ದು ಮಾಡುತ್ತಿರೋ ವಿವಾದದ ನಡುವೆ ಶ್ರೀಗಳ ‘ಹುನ್ನಾರ’ದ ಪೋಸ್ಟ್: ಏನಿದು ಒಳಗಿನ ಮರ್ಮ?

ಪ್ರವಾಸೋದ್ಯಮ ಮತ್ತು ಸಂಸ್ಕೃತಿ:

  • ರೋಪ್‌ವೇ: ಮುಳ್ಳಯ್ಯನಗಿರಿಯಿಂದ ಸೀತಾಳಯ್ಯನಗಿರಿ ವರೆಗೆ ರೋಪ್‌ವೇ ನಿರ್ಮಾಣ.
  • ಅಂಜನಾದ್ರಿ ಬೆಟ್ಟ: ಕೊಪ್ಪಳದ ಅಂಜನಾದ್ರಿ ಅಭಿವೃದ್ಧಿಗೆ 100 ಕೋಟಿ ರೂ.
  • ಧಾರ್ಮಿಕ ಸಹಾಯಧನ: ವೈಷ್ಣೋದೇವಿ ಯಾತ್ರಾರ್ಥಿಗಳಿಗೆ ತಲಾ 5,000 ರೂ. ಸಹಾಯಧನ.

ಸರ್ಕಾರದ ಆದಾಯದ ಲೆಕ್ಕ (ಪ್ರತಿ 1 ರೂಪಾಯಿಯಲ್ಲಿ):

  • ಬರುವುದು: ಸ್ವಂತ ತೆರಿಗೆ (49 ಪೈಸೆ), ಸಾಲ (29 ಪೈಸೆ), ಕೇಂದ್ರದ ಪಾಲು (14 ಪೈಸೆ).
  • ಹೋಗುವುದು: ಸಾಲ ತೀರಿಸಲು (20 ಪೈಸೆ), ಸಂಬಳ/ಪೆನ್ಷನ್ (18 ಪೈಸೆ), ಶಿಕ್ಷಣ (10 ಪೈಸೆ), ಆರೋಗ್ಯ (4 ಪೈಸೆ).

ಈ ಬಜೆಟ್ ಅಭಿವೃದ್ಧಿಗಿಂತ ಹೆಚ್ಚಾಗಿ ಗ್ಯಾರಂಟಿ ಮತ್ತು ಸಾಲದ ಮೇಲೆ ಕೇಂದ್ರೀಕೃತವಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments